Wednesday, February 16, 2011
ಮುಗುದೆ ನಿನ್ನ ಮನದ ದುಗುಡ
ಅರಳದಿವೆ ಮನಸ ಮುನಿದು
ಗಲ್ಲೆನ್ನುವ ಕೈಯ ಬಳೆಗಳು
ಕೊರಳಬಿಗಿದಿವೆ ಕೋಪ ತಳೆದು
ಮುಗುದೆ ನಿನ್ನ ಮೊಗದ ಗೆರೆಯ
ಹಿಂದೆ ದುಗುಡವೆನೋ ಅಡಗಿದೆ
ತುಟಿಯ ಮೇಲೆ ಅರಳದಲೆ ಕಿರುನಗೆ
ಮೊಗದ ಕಳೆಯು ಕಳೆದಿದೆ
ಹಳೆಯ ದಿನದ ಕಳೆದ ಕತೆಯ
ಕಳೆದು ಹೋಗಲು ಬಿಟ್ಟುಬಿಡು
ಸೆಳೆದು ಸೆಳೆದು ಯಾಕೆ ಕೊರಗುವೆ
ಸುಳಿಯ ನೀನು ತೊರೆದುಬಿಡು
ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ
ಮಾತು ಕೊಡುವೆ ಮನಸಿನಿಂದ
ಆತುಕೊಳುವೆ ಕೊನೆಯವರೆಗೆ
ಅತ್ತ ಇತ್ತ ಹೊರಳದಂತೆ
ಮತ್ತೆ ಏನ ನೆನೆಯದಂತೆ
ಒಂದೆ ನುಡಿಯು ಒಂದೆ ನಡೆಯು
ಅಂದು ಇಂದು ಎಂದೂ ಒಂದೆ
ಮುಂದೆ ಬೇರೆಯಾಡದಂತೆ
ಇಂದೆ ವಚನ ನೀಡುವೆ
ತೂರಿ ಬರುವನು ತೂರ್ಪಿನಲ್ಲಿ
ಮೇರೆ ಅರಿಯದ ದಿನಕರ
ತೆರೆದ ಮನಸು, ತೆರೆದ ಹೃದಯ
ತೆರವಿಲ್ಲದ ಸ್ವಾಗತಿಸುವೆ
ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ
ರಚನೆ :-ಜಯಪ್ರಕಾಶ ನೇ ಶಿವಕವಿ
Friday, January 7, 2011
ಗೆಳತಿ
ಗೆಳತಿ ನಿನ್ನದೇ ಮುಖ..
ಮರೆತೇ ಹೊಗಿತ್ತು
ಅ೦ತರಾಳದಲಿ ಸೆರಿಕೊ೦ಡು
ಅಲೆ ಎಬ್ಬಿಸದೆ ಮಲಗಿತ್ತು.
ತುಟಿಯ೦ಚಿನಲಿ
ಅರಳಿದ ಆ ನಗೆ
ಸಹಜವಾಗಿಯೇ ಇತ್ತು
ನಿನ್ನದೇ ಆದ ಆ ಮುಖವನು
ಮರೆ ಮಾಚುವ ತವಕದಲಿತ್ತು
ಬದುಕು ಸಹಜವಾದುದು
ಅದಕೇಕೆ ಬಣ್ಣ ಬಳಿಯಬೇಕು
ಇದ್ದದೆಲ್ಲವನು ಇದ್ದ ಹಾಗೆ
ಹೇಳಲಾಗದ ಯಾತನೆ ಯಾಕೆ ಬೇಕು?
ಹೌದು!
ಅ೦ದೊ೦ದು ದಿನ ಸ೦ಜೆಯಲ್ಲಿ
ಕೆ೦ಪೇರಿತ್ತು ಸುತ್ತಮುತ್ತಲಲ್ಲಿ
ಭೂತಾಯಿ ನಾಚಿ ನೀರಾಗಿ
ಮಧುವಣಗಿತ್ತಿಯ೦ತಾಗಿ
ಮರೆಯುತ್ತಿರುವ ಸಮಯದಲ್ಲಿ
ಹಕ್ಕಿಗಳ ಹಿ೦ಡು, ಮರಳುತ್ತಿತ್ತು ಗೂಡಿಗೆ,
ಮಕ್ಕಳ ಪಾಲನೆಗೆ
ತುಸು ಅಕ್ಕಿ ಹೊತ್ತುಕೊ೦ಡು,
ಹಾಡುತ್ತ, ಕುಣಿಯುತ್ತ…
ಚಿತ್ತಾರ ಬರೆಯುತ್ತ..
ಅ೦ಬರದಲ್ಲಿ…
ಬೆಳಕು ಮುರಿಯಿತು
ಕತ್ತಲಾವರಿಸಿತು
ತಾರೆಗಳ ಹಿ೦ಡು ಧುಮ್ಮಿಕ್ಕಿ ಬ೦ತು
ಅ೦ಗಳಕೆ ಆಡಲು,
ತಿ೦ಗಳ ಚ೦ದ್ರಮನ ಜೊತೆಗೆ,
ನೀರವತೆಯು ತು೦ಬಿತ್ತು
ಸುತ್ತಲೂ, ಎತ್ತೆತ್ತಲೂ…
ನನ್ನ ಜೊತೆ ನೀನು
ನಿನ್ನ ಜೊತೆ ನಾನು
ಊರ ಹೊರಗಿನ ಕೆರಯ ಅ೦ಗಳದಲ್ಲಿ
ಮೌನ ಮುರಿಯಲು ಇಲ್ಲ
ಮಾತನಾಡಲು ಇಲ್ಲ
ನನ್ನೆಡೆಗೊ೦ದು ನೇಟ ಬೀರಿ,
ತುಸು ನಕ್ಕು, ಅತ್ತು,
ನೀನೊರಟೆ ಹಿಡಿದು ಊರ ದಾರಿ,
ನಾ ಕಾರಣ ಕೇಳುವ ಮೊದಲೇ…
ನಾ ಕಾದೆ, ಅದೇ ಜಾಗದಲಿ
ಮತೇ ನೀ ಬರುವೆ ಎ೦ಬೊ೦ದು ಆಸೆಯಲಿ
ನಮ್ಮ ಕನಸಿನ ಪ್ರೇಮಸೌಧದ ನೆನಪಿನಲಿ
ಸುದ್ದಿ ಇರಲಿಲ್ಲ, ಸುಳುವು ಸಿಗಲಿಲ್ಲ…
ಆದರೇ!
ಒಮ್ಮಿ೦ದೊಮ್ಮೆಲೇ…
ಹೇಗೋ ತಿಳಿಯಿತು
ನೀ ಬಹುದೂರ ಹೊದದ್ದು
ಸ೦ಪ್ರದಾಯದೊಳೆಯಲ್ಲಿ
ತೇಲಿ, ಆ ದಡವ ಸೇರಿದ್ದು
ಅರ್ಥವಾಯಿತು ನಿನ್ನ ಆ
ನಗು ತು೦ಬಿದಳುವು,
ಅಳುತು೦ಬಿದ ನಗುವು
ಮತ್ತೇನ ಮಾಡುವುದು
ಹೊತ್ತು ಮೀರಿ ಹೋಗಿತ್ತು
ದಾರಿ ಅಲ್ಲಿ ಕವಲಾಗಿತ್ತು.
ಬದುಕಲ್ಲವೇ ಇದು!
ಬದುಕ ಬೇಕಾಯ್ತು ನೋಡು
ಮನಸೊ೦ದು ಕಡೆ,
ಒಡಲೊ೦ದು ಕಡೆ,
ಹೇಗೋ ಸ೦ಭಾಳಿಸಿದೆ ಕೊನೆಗೆ,
ತ೦ದು ಮನಸನು ತಹಬದಿಗೆ.
ಗ೦ಡಸಲ್ಲವೇ ನಾನು!
ಅಳುತ ಕೂರುವುದು ಸರಿಯೇ?
ನಕ್ಕೆ! ನಕ್ಕೇ !!
ದಿನ ಹೋಗಿ ಅದೇ ಜಾಗದಲಿ!
ನಿನ್ನ ನೆನಪುಗಳನೆಲ್ಲ
ಅಳಿಸಿ ಹಾಕುವ ನೆವದಲ್ಲಿ.
ಹೋಗಲಿ!
ಹಳೆಯ ಹಾಡನು
ಮರೆವೆ ನಾನು
ಹೇಗಿರುವೆ ಮದುವೆಯಾಗಿ?
ಮೂರು ಮಕ್ಕಳ ತಾಯಾಗಿ?
ನೆನಪಿದ್ದರೆ ನಿನಗೆ, ನಮ್ಮ ಆ ಕ್ಷಣಗಳನು
ಮರೆತು ಬಿಡೆ೦ದು ಬೆಡುವೆನು
ಒಲವ ಬದಿಗಿಟ್ಟು
ಸ್ನೇಹದ ಗಿಡವ ನೆಟ್ಟು
ಬೆಳೆಸೋಣ, ಬದುಕೋಣ..
ಕವಲೊಡೆದ ದಾರಿಯಲಿ
ಒಬ್ಬರಿಗೊಬ್ಬರು ನೆರವಾಗುತಲಿ
ಈ ಬಾಳ ಸವೆಸೋಣ….
- ಜಯಪ್ರಕಶ್ ನೇವಾರ ಶಿವಕವಿ
Sunday, December 19, 2010
ಹೊಸದೊಂದು ಪರಿಚಯಕೆ
ºÉƸÀzÉÆAzÀÄ ¥ÀjZÀAiÀÄPÉ
ºÀ¸À£ÁzÀ ªÀÄ£À¢AzÀ
¸ÁéUÀvÀªÀ PÉÆÃgÀĪÉ
JzÉAiÀiÁ¼ÀzÉÆ®«AzÀ
JzÉAiÀÄ §£ÀzÀ
PÉÃzÀUÉAiÀÄ PÁ¢j¹
PÁAiÀÄÄªÉ ¤Ã §gÀĪÀ WÀ½UÉUÁV
©jzÀ ªÀİèUÉ ªÉÆUÀÄÎ
zÁjAiÀİ ºÀgÀr¹
PÁAiÀÄÄªÉ ¤Ã §gÀĪÀ WÀ½UÉUÁV
UÀAzsÀ ¸ÀƸÀĪÀ
ZÀAzÀ£ÀzÀ ªÀÄgÀUÀ¼À£ÀÄ
EPÉÌ®¢ £Éqɹ
PÁAiÀÄÄªÉ zÁjAiÀİ ¤Ã §gÀĪÀ ªÉüÉUÁV
£À£Éß®è PÀ£À¸ÀÄUÀ¼À
ªÀÄÄr¦qÀÄªÉ ¤£ÀUÁV
EgÀÄªÉ®è ¦æÃwAiÀÄ£ÀÄ
PÁ¦qÀÄªÉ ¤£ÀUÁV
ºÀUÀ®Ä EgÀļÀÄUÀ¼À°è
¨Á¼À ¥ÀAiÀÄtzÀ Kj½vÀUÀ¼À°è
eÉÆvÉVgÀÄªÉ £ÉgÀ¼ÁV
¤£ÉÆß®ªÀ PÉÆgÀ¼ÁV
¤Ã £ÀÄrªÀ J®è ªÀiÁw£À
ªÀiÁvÀÄ £Á£ÁUÀĪɣÀÄ
¤Ã §gɪÀ gÀAUÀªÀ°èAiÀÄ
¥Àæw ZÀÄQÌAiÀiÁUÀĪɣÀÄ
¤Ã §gɪÀ avÀæPÉÌ
§tÚ-©üwÛ-¨sÁªÀ £Á£ÁUÀĪɣÀÄ
ºÉÆA¨É¼Àಗ ¸ÀƸÀĪÀ
¤£Àß eÉÆÃr £ÀAiÀÄ£À £ÀPÀëvÀæUÀ¼ÀÄ
JAzÉAzÀÆ £ÀUÀÄwgÀ®Ä
¤ÃqÀĪɣÀÄ £À£Àß ¨Á¼À ¨ÁAzÀ¼ÀªÀ£ÀÄ
ºÀUÀ®Ä EgÀļÀÄUÀ¼À°è
ªÀÄÄA¨É¼ÀUÀÄ ¨ÉÊV£À°
¸ÀÆAiÀÄð-ZÀAzÀæ-vÁgÉUÀ¼À ºÁUÉ
£Á¤gÀÄªÉ ¤£ÉÆßqÀ£É
¤£Àß JzÉAiÀÄ §A¢üAiÀiÁV
- ಜಯಪ್ರಕಾಶ ನೇ ಶಿವಕವಿ
Tuesday, July 27, 2010
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ
ಅಲೆ ಅಲೆಯಾಗಿ ಹೊಮ್ಮುತಿದೆ
ಎದೆಯ ಸದನದಿ ನೇರ
ನೀ ಎದುರಾದ ಖುಷಿಯಿಂದ
ನೀ ಬಲ್ಲೆ ಅದನ್ನೆಲ್ಲಾ ನಾ ಹೇಳದಿದ್ದರೂ
ನಾ-ನೀನಿರುವ
ಈ ಜಗದ ಮೊಗಸಾಲೆಯಲಿ
ಹಲವು ನೂರು ಜನರಿದ್ದರೂ
ನಾನು ಮಾತ್ರವೇ ಒಂಟಿ
ನೀ ಬಲ್ಲೆ ಅದನೆಲ್ಲಾ ನಾಹೇಳದಿದ್ದರೂ
ನುಡಿವ ಮಾತುಗಳಿಲ್ಲಿ
ನಡೆವ ಹೆಜ್ಜೆಗಳಲ್ಲ
ನುಡಿಗೂ-ನಡೆಗೂ ತಪ್ಪಿರುವ ಮೇಳದಲ್ಲಿ
ಬರಿ ಹಿಮ್ಮೇಳ ನಾನು-ನೀನು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ
ಬದುಕು ವಾಸ್ತವದಲ್ಲಿ
ಶುಷ್ಕ ವ್ಯವಹಾರ
ಜಗದ ಜುತ್ತದು ಇಂದು
ಒಣ ಹಣದ ಕೈಯಲ್ಲಿ
ನಾ-ನೀ... ಅದರಲ್ಲಿ ಒಬ್ಬರು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ
ಪ್ರವಾಹಕ್ಕಿದಿರಾಗಿ ಈಸಿ
ದಡ ಸೇರಲರಿಯದೆ
ಬದಲಿಸಿದೆ ಗತಿಯ
ಬದುಕುವದ ಕಲಿಯಲು
ನೀ ಬಲ್ಲೆ ಅದನೆಲ್ಲಾ ನಾ ಹೇಳದಿದ್ದರೂ
ಒಲಿದು ಬಂದ ಒಲವೆ ನೀನು
ಎಂದೋ ನೋಡಿದ
ನೆನಪು ಎಲ್ಲೋ ಕೂಡಿದ ನೆನಪು
ನೆನಪಿನ ನೆನಪಲ್ಲೆ
ಮರೆತ ಮರೆವಿನ ಸುಳಿಹು ನೀನು " ೧ "
ಕಾಂತಿಯಿಲ್ಲದ ಚೆಂದ್ರ
ಹೊಳೆವ ಗುಟ್ಟಾದ ಕಂಡೆ
ನನ್ನ ಕಣ್ಣಲಿ ಸುಳಿದ
ನಿನ್ನ ಕಣ್ಣ ಮಿಂಚಿನಿಂದ " ೨ "
ಕೋಟಿ ತಾರೆಯ ಮಿಂಚು
ಸುಳಿದು ಕಣ್ಣಂಚಿನಲಿ
ಸೆಳೆಯುತಿದೆ ಎನ್ನ
ನಿನ್ನ ಸೂಜಿಗಲ್ಲಿನ ನಿಲುವು " ೩ "
ಹಗಲು ಇರುಳುಗಳಲ್ಲಿ
ಬದುಕ ದ್ವಂದ್ವಗಳಲ್ಲಿ
ಕಳೆದ ನಿನ್ನೆಯ ನೆನಪ
ಭರವಸೆಯ ಬೆಳಕು ನೀನು " ೪ "
ಎಲ್ಲಿ ಬದುಕಲಿ ಹೇಗೆ ಬದುಕಲಿ
ಎಂದಿತ್ತು ಬಾಳ ನಿಲುವು
ಬದುಕಿಗೊಂದು ನೆಲುವ ತೋರೆ
ಬಂದ ಬದಲಾವಣೆಯೇ ನೀನು " ೫ "
ಮೋಸವಿಲ್ಲದ ಮಾತು
ಕಪತವಿಲ್ಲದ ನೋಟ
ಎಳೆಗರುವ ಎತ್ತಾಗಿಸಲು
ಒಲಿದು ಬಂದ ಒಲವೇ ನೀನು " ೬ "
Sunday, August 17, 2008
ನಾಳೆ ಎಂಬುದು ಕತ್ತಲು
ಏನು ಅಲ್ಲಿದೆ ಎಂದು
ನಿನ್ನೆಯದು ಬೆತ್ತಲೆಯು
ಉಳಿದಿಲ್ಲ ಒಂದು
ಮಾಡಲೇತಕೆ ನೀನು
ಅದರ ಚಿಂತೆಯನು
ಅಂದಿನ ಕೆಲಸವನು
ಮಾಡಲು ಆಂದಂದು
ಕೀಲು ಕೊಟ್ಟರೆ ಕುಣಿವ
ಗೊಂಬಿಗಳು ನಾವಲ್ಲ
ನಮ್ಮೊಳಗೂ ತುಂಬಿಹವು
ನೂವುಗಳು, ನಲಿವುಗಳು
- 1-
ಯಾರಿಗೋ ಯಾತಕೋ
ಈ ಭೂಮಿ ಬ್ರಹ್ಮಾಂಡ
ಆರೂ ಅರಿದವರಿಲ್ಲ
ಅದರ ಪೂರ್ತಿ ಮರ್ಮ
ಪ್ರೀತಿ ಪ್ರೇಮದ ಜಾತ್ರೆ
ಮಾಡುವುದು ಬಲು ಸರಳ
ಎಲ್ಲವೂ, ಎಲ್ಲದೂ
ಉತ್ತುಂಗದಲಿ ಇರುವಾಗ
ಕಷ್ಟಗಳು ಕೂಡಿರಲು
ಕತ್ತಲೆಯು ತುಂಬಿರಲು
ಎದೆಯಗುಂದದೆ, ಬೆನ್ನು ತೋರದೆ
ನಡೆಯುವುದು ನಿಜ ಧರ್ಮ
- 2 -
ನೋವುಗಳು, ನಲಿವುಗಳು
ನಮ್ಮೆರಡು ಕಣ್ಣುಗಳು
ಬೇಕು ಈ ಎರಡು
ಬದುಕ ಬಿತ್ತಾರವನು ಅರಿಯಲು
ಅಂತರಂಗದ ಕದವ
ನಾವು ತೆರೆಯಲು ಬೇಕು
ಅನಂತ ವಿಶ್ವದಜೊತೆಗೆ
ಪ್ರೀತಿಯಿಂ ಬಾಳಲು
ತಪ್ಪುಗಳು ಸಹಜ
ತದ್ದಿ ನಡೆವುದು ಜಾಣ್ಮೆ
ಅರಿತೂ ಹಠಮಾಡುವುದು
ನಮ್ಮ ಬಾಳ್ವೆಯ ಕುಲ್ಮೆ
-3-
ದೇವ ಮಾನವರು ನಾವಲ್ಲ
ಎಲ್ಲವೂ ಎಣಿಸಿದಂತಿರಲು
ಮಿತಿಯುಳ್ಳ ನರರು
ಹೊಂದಾಣಿಕೆಯೆ ನಮ್ಮ ಕರುಳು
ನಿನ್ನೆಗಳ, ನಾಳೆಗಳ
ಅಡಕತ್ತರಿಗೆ ಸಿಗದುಳಿದು
ಬರುವ ದಿನಗಳಲಿ, ಧೈರ್ಯದಿಂ ಬಾಳು
ಧೈರ್ಯವೇ ನಿಜ, ನಿಜದಿ ಬಾಳು.
-4-
ಜಯಪ್ರಕಾಶ ನೇ ಶಿವಕವಿ.
Friday, April 18, 2008
ನಾ ಸೊತಾಗಲೆಲ್ಲಾ
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ
ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.
ಜೊತೆಯಾಗಿ ಬಾಳುವನು, ಹೊರಾಡುವನು,
ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,
ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,
ಅವನೇ ಅವನು ನನ್ನೊಳಗೆ ನೆಲೆಸುವ೦ತವನು
ಈಸೊ೦ದು ದಿನ, ಬೇರೇನೊ೦ದನೂ ನಾನೆಣಿಸಲಿಲ್ಲ
ಅವನು ನನ್ನೊಳಗೆ ಇರುವನೆ೦ಬೊ೦ದು ನೆವದಲ್ಲಿ
ಹೊಳೆವ ರವಿಕಿರಣಗಳ ತೆರನಿದ್ದ ಅವನ ನೆನವಲ್ಲಿ
ತೊರೆಯನವನೆ೦ದಿಗೂ ಎ೦ಬ ತು೦ಬು ಭರವಸೆಯಲ್ಲಿ
ಬದಲಾಗುತಿವೆ ಸಮಯ, ಬದಲಾಗುತಿವೆ ಋತುಗಳು
ನಾನು ಮಾತ್ರವೇ ಒ೦ಟಿ, ಯಾರಿಲ್ಲದೆ ಎನ್ನ ಜೊತೆಯಲ್ಲಿ
ಕಳೆದುಕೊ೦ಡು ಗೆಲುವುಗಳನು,ಸೆಳೆದುಕೊ೦ಡೆ ಸೋಲುಗಳನು
ಎಲ್ಲಿರುವೆಯೊ ಗೆಳೆಯ, ನನ್ನ ಮುನ್ನಡೆಸದೆ ನೀನು
ದಿನಗಳುರುಳಿದ೦ತೆಲ್ಲಾ, ದುಃಖಗಳೂ ಏರುತ್ತಿವೆ
ನಾ ಸರಿಯೊ, ನಾ ತಪ್ಪೊ ಅರಿವಾಗದ೦ತಿದೆ ನನಗೆ
ಬೇಕಾಗಿದೆ ನನಗೀಗ ನಿಮ್ಮಗಳಲ್ಲೊಬ್ಬರ ನೆರವು
ಬರುವಿರಾ ಯಾರಾದರು ನೆರವ ನೀಡುವ ಧೈರ್ಯದಲಿ
ಅವನೇ ನನ್ನ ಆತ್ಮ, ನನ್ನೊಳಗಿನ ಆಲೋಚನೆಗಳು
ಯಾರಾದರು ಅವನ ನನ್ನೆಡೆಗೆ ತರುವಿರಾ
ಭಯವಿದ್ದರೇನು, ಬಿಕ್ಕಟ್ಟುಗಳಿದ್ದರೇನು ನನ್ನೊಳಗೆ
ಆರದೆ ಇದೆ ಇನ್ನೂ ಭರವಸೆ, ಮತ್ತೊಮ್ಮೆ ಅವನು ನನ್ನಲ್ಲಿ ನೆಲೆಸುವನೆ೦ದು..
(ಇ೦ಗ್ಲಿಷ್ ನಿ೦ದ ಕನ್ನಡಕ್ಕೆ ಆನುವಾದಿಸಿದವರು - ಜಯಪ್ರಕಶ್ ನೆವಾರ ಶಿವಕವಿ.)