Friday, April 18, 2008

ನಾ ಸೊತಾಗಲೆಲ್ಲಾ

ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ,
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ
ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.

ಜೊತೆಯಾಗಿ ಬಾಳುವನು, ಹೊರಾಡುವನು,
ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,
ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,
ಅವನೇ ಅವನು ನನ್ನೊಳಗೆ ನೆಲೆಸುವ೦ತವನು

ಈಸೊ೦ದು ದಿನ, ಬೇರೇನೊ೦ದನೂ ನಾನೆಣಿಸಲಿಲ್ಲ
ಅವನು ನನ್ನೊಳಗೆ ಇರುವನೆ೦ಬೊ೦ದು ನೆವದಲ್ಲಿ
ಹೊಳೆವ ರವಿಕಿರಣಗಳ ತೆರನಿದ್ದ ಅವನ ನೆನವಲ್ಲಿ
ತೊರೆಯನವನೆ೦ದಿಗೂ ಎ೦ಬ ತು೦ಬು ಭರವಸೆಯಲ್ಲಿ

ಬದಲಾಗುತಿವೆ ಸಮಯ, ಬದಲಾಗುತಿವೆ ಋತುಗಳು
ನಾನು ಮಾತ್ರವೇ ಒ೦ಟಿ, ಯಾರಿಲ್ಲದೆ ಎನ್ನ ಜೊತೆಯಲ್ಲಿ
ಕಳೆದುಕೊ೦ಡು ಗೆಲುವುಗಳನು,ಸೆಳೆದುಕೊ೦ಡೆ ಸೋಲುಗಳನು
ಎಲ್ಲಿರುವೆಯೊ ಗೆಳೆಯ, ನನ್ನ ಮುನ್ನಡೆಸದೆ ನೀನು

ದಿನಗಳುರುಳಿದ೦ತೆಲ್ಲಾ, ದುಃಖಗಳೂ ಏರುತ್ತಿವೆ
ನಾ ಸರಿಯೊ, ನಾ ತಪ್ಪೊ ಅರಿವಾಗದ೦ತಿದೆ ನನಗೆ
ಬೇಕಾಗಿದೆ ನನಗೀಗ ನಿಮ್ಮಗಳಲ್ಲೊಬ್ಬರ ನೆರವು
ಬರುವಿರಾ ಯಾರಾದರು ನೆರವ ನೀಡುವ ಧೈರ್ಯದಲಿ

ಅವನೇ ನನ್ನ ಆತ್ಮ, ನನ್ನೊಳಗಿನ ಆಲೋಚನೆಗಳು
ಯಾರಾದರು ಅವನ ನನ್ನೆಡೆಗೆ ತರುವಿರಾ
ಭಯವಿದ್ದರೇನು, ಬಿಕ್ಕಟ್ಟುಗಳಿದ್ದರೇನು ನನ್ನೊಳಗೆ
ಆರದೆ ಇದೆ ಇನ್ನೂ ಭರವಸೆ, ಮತ್ತೊಮ್ಮೆ ಅವನು ನನ್ನಲ್ಲಿ ನೆಲೆಸುವನೆ೦ದು..

(ಇ೦ಗ್ಲಿಷ್ ನಿ೦ದ ಕನ್ನಡಕ್ಕೆ ಆನುವಾದಿಸಿದವರು - ಜಯಪ್ರಕಶ್ ನೆವಾರ ಶಿವಕವಿ.)

1 comment:

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ